ಉತ್ತರ ಕುಮಾರನ ಪೌರುಷ ಒಲೆ ಮುಂದೆ ಅಂತೆ...
ಮೊನ್ನೆ ರಾಷ್ಟ್ರ ಕವಿ ಶ್ರೀಯುತ ಶಿವರುದ್ರಪ್ಪನವರು ತೀರಿಕೊಂಡ ಕಾರಣ ಕರ್ನಾಟಕ ಸರ್ಕಾರವು ನೆನ್ನೆ (24-12-2013) ಸರ್ಕಾರಿ ರಜೆ ಘೋಷಿಸಿತು. ಪರಿಣಾಮ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ನಿಗದಿತ ಪರೀಕ್ಷೆಗಳು 4-1-2014ರವರೆಗೆ ಮುಂದೆ ಹೋಯಿತು.ಪರಿಣಾಮವಾಗಿ ಕೆಲವು ಭಾರತೀಯರಿಗೆ( ಕನ್ನಡಿಗರಿಗೆ ಮತ್ತು ಇತರರಿಗೆ) ಅಯ್ಯೋ ರಜೆ ಕಡಿಮೆ ಆಯಿತಲ್ಲ , ರೈಲಿಗೆ ಆರಕ್ಷಣೆ ಮಾಡಿಸಲು ವಿನಿಯೋಗಿಸಿದ್ದ ಹಣ ವ್ಯರ್ಥವಾಯಿತಲ್ಲಾ ಎಂದು ಬೇಸರವಾಯಿತು.ನಾನು ಹೇಳುತ್ತಿರುವುದು ಅವರು
ಅದರಲ್ಲಿ ಕೆಲವರು FACEBOOKನಲ್ಲಿ ಕೆಟ್ಟದಾಗಿ ವ್ಯಕ್ತಪಡಿಸಿದ್ದಾರೆ.ಅಷ್ಟಕ್ಕೇ ಆಕಾಶ ಕೆಳಗೆ ಬಿದ್ದವರಂತೆ ಆಡುವುದೇ ?
'ನಮ್ಮ ಸಾಂಸ್ಕೃತಿಕ' ಪದಗಳನ್ನು ಉಪಯೋಗಿಸಿ ಬೈದಿದ್ದೇನು ,ಅವನ್ನನ್ನು ಹಾಗೆ ಮಾಡಬೇಕು ಹೀಗೆ ಮಾಡಬೇಕು ಅಂತ ರೋಷ ಪೂರಿತ Comment ಮಾಡಿದ್ದೇನು ... ಅಬ್ಬಬ್ಬಬ್ಬಾ.....
ನಿಮ್ಮಲ್ಲೇ ಎಷ್ಟು ಜನರಿಗೆ ಶಿವರುದ್ರಪ್ಪನವರ ಕೃತಿಗಳ ಬಗ್ಗೆ 5 ಪೈಸೆಯಷ್ಟು ಜ್ಞಾನ ಇದೆ ?
ಎಷ್ಟು ಜನ ಶಿವರುದ್ರಪ್ಪನವರ ಜೀವನದ ಬಗ್ಗೆ ಓದಿದ್ದೀರಾ ? ಅವರ ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡಿದ್ದೀರಾ ?ಇವೆಲ್ಲವುಗಳಲ್ಲಿ ಒಂದುನ್ನು ಮಾಡಿ , ಕನ್ನಡಕ್ಕೆ ನಿಮ್ಮ ಸೇವೆ ಹೆಚ್ಚುತ್ತದೆ . ಅದು ಬಿಟ್ಟು ಥೂ ನಾಚಿಕೆಯಾಗಬೇಕು ನಿಮ್ಮ ವರ್ತನೆಗೆ.
ಬಹುಶಹ 1995-96ರ ನಂತರ ಕರ್ನಾಟಕದಲ್ಲಿ ಹುಟ್ಟು ಬೆಳೆದ ಅಥವಾ ಸಾಹಿತ್ಯಾಸಕ್ತಿ ಇರದ ಕನ್ನಡಿಗರಿಗೆ ಶಿವರುದ್ರಪ್ಪನವರ ಹೆಸರು ಹೊಸದಿರುವಾಗ , ಎಲ್ಲೋ ಉತ್ತರ ಭಾರತದಲ್ಲಿ ಓದಿ ಬೆಂಗಳೂರಿಗೆ ಬಂದಿರುವವರಿಗೆ ಅವರ ಹೆಸರು, ಅವರ ಘನತೆ ಹೇಗೆ ಗೊತ್ತಾಗಬೇಕು ಹೇಳಿ ?
ನಾನು ಹೇಳುತ್ತಿರುವುದು, ಅವನದು ಏನು ತಪ್ಪಿಲ್ಲ ಎಂದಲ್ಲ. ಅವನು ತಪ್ಪು ಮಾಡಿದ್ದಾನೆ, ಕ್ಷಮೆ ಕೇಳಿದ್ದಾನೆ .. ಬಿಟ್ಟು ಬಿಡಿ.. ಅದೇ ನಮಗೆ ಶೋಭೆ.
ಗುಬ್ಬಿಯ ಮೇಲೆ ಬ್ರಂಹಾಸ್ತ್ರವೇ ?
ಎರಡು ದಿನಗಳ ಹಿಂದೆ ನಾವೇ ನೋಡಿದಂತೆ ಕನ್ನಡ ಸಾಹತ್ಯ ಪರಿಷತ್ತಿನವರು ಸರ್ಕಾರಿ ಹಣವಿಲ್ಲದೆ ಒದ್ದಾಡುತ್ತಿದೆ . ಸಚಿವೆ ಉಮಾಶ್ರೀಯವರಿಗೆ ಕೇಳಿದರೆ ಸಂಭಂದವೇ ಇಲ್ಲವೆಂಬಂತೆ ಮಾತನಾಡಿದರು. ನಿಮಗೆ ನಿಜವಾಗಲೂ ಕನ್ನಡದ ಬಗ್ಗೆ ಆಸ್ಥೆ ಇದ್ದರೆ ಇದರ ಬಗ್ಗೆ ಮಾತಾಡಿ. ಅದು ಬಿಟ್ಟು ಒಬ್ಬ ಸಾಮಾನ್ಯ ಮನುಷ್ಯನ ವಿರುದ್ದ ಎಲ್ಲರೂ ಸೇರಿ ಕಿರಚಾಡುವುದೇ ? ನಾಚಿಕೆ ಪಡಿ ನಿಮ್ಮನ್ನು ನೋಡಿಕೊಂಡು .
(ಆಯುಷ್ ಮೇಲೆ change.org ನಲ್ಲಿನ ದಾವೆ)
ಕೊನೆಯದಾಗಿ ನಾನು ಹೇಳುವುದು ಇಷ್ಟೇ , ದಯವಿಟ್ಟು ನಿಮ್ಮ ಇದೆ ರೋಷವನ್ನು,ಕಿಚ್ಚನ್ನು , ಪೌರುಶತ್ವವನ್ನು ನಮ್ಮ ಸೈನಿಕರ ತಲೆಗಳನ್ನು ತೆಗೆದುಕೊಂಡು ಹೋಗುತ್ತಿರುವ ಪಾಕಿಸ್ತಾನ ಹಾಗೂ ಚೀನಾ ವಿರುದ್ದವೂ ತೋರಿಸಿ. ಆಗ ನಿಮ್ಮ ಆ ಗುಣಗಳು ನಿಮ್ಮಲ್ಲಿರುವುದಕ್ಕೆ ಸಾರ್ಥಕತೆ ಸಿಗುತ್ತದೆ.
